ಆನೆಗಳ ಕಷ್ಟವನ್ನು ನೋಡಿ...!


ರಾಜ್ಯದ ಹನ್ನೊಂದು ಆನೆ ಶಿಬಿರಗಳಲ್ಲಿ ಒಂದಾಗಿರುವ ಕೆ.ಗುಡಿ(ಕ್ಯಾತೇಶ್ವರ ಗುಡಿ)ಯ ಆನೆ ಕ್ಯಾಂಪಿನಲ್ಲಿ ಇರುವ ಆನೆಗಳು ಪಡುತ್ತಿರುವ ಪರಿಪಾಡನ್ನು ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರು ಪ್ರತ್ಯಕ್ಷವಾಗಿ ಕಂಡು ಪರಾಮರ್ಶಿಸಿದ್ದಾರೆ. ಅದನ್ನು ದೃಶ್ಯರೂಪಗಳಲ್ಲಿ ಕೂಡ ಸೆರೆಹಿಡಿದು ತಮ್ಮ ಮುಂದೆ ಇಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆನೆಗಳ ವೇದನೆಯ ಮನಮಿಡಿಯುವ ದೃಶ್ಯಗಳನ್ನು ಹಾಗೂ ಆನೆ ಶಿಬಿರದಲ್ಲಿ ಇರುವ ಮಾವುತರು ಹಾಗೂ ಕಾವಾಡಿ ಕುಟುಂಬದವರ ಸಮಸ್ಯೆಗಳನ್ನು ಅರಿಯಲು ನೀವೂ ಬಯಸುವುದಾದರೆ ಈ ಸಾಕ್ಷ್ಯಚಿತ್ರವನ್ನು ಒಮ್ಮೆ ಖಂಡಿತವಾಗಿಯೂ ನೋಡಿ. ಆಸಕ್ತರಿಗೆ ಸಾಕ್ಷ್ಯಚಿತ್ರದ "ಸಿಡಿ" ಹಾಗೂ "ಡಿವಿಡಿ"ಯನ್ನು ಕಳುಹಿಸಿಕೊಡಲಾಗುವುದು. ಈ ಸಾಕ್ಷ್ಯಚಿತ್ರವನ್ನು ಕಿರುತೆರೆ ನಟಿಯೂ ಆಗಿರುವ "ಜಿಎನ್ಎಸ್" ಯಾಮಿನಿ ಫೌಂಡೇಷನ್ ಕಾರ್ಯದರ್ಶಿ ಶೋಭಾ ಎಂ.ಲೋಲನಾಥ್ ಅವರು ನಿರ್ಮಿಸಿದ್ದಾರೆ.

ಆನೆ ಶಿಬಿರಗಳ ಸಮಸ್ಯೆ ಬಿಂಬಿಸುವ ಸಾಕ್ಷ್ಯಚಿತ್ರದ
ಉಚಿತ ಸಿಡಿ ಹಾಗೂ ಡಿವಿಡಿ
ಪಡೆಯಲು ಸಂಪರ್ಕಿಸಿ:
ಕೆ.ಆರ್. ಸುದರ್ಶನ್ ಬಾಬು (ಮೊಬೈಲ್: 9986790221)
ಕೇಶಿ (ಮೊಬೈಲ್: 9449205331)