"ಮುಸ್ಸಂಜೆ"ಯಲ್ಲಿನ ಲೇಖನ ಓದಿದ ಸಚಿವರ ಮುಖದಲ್ಲಿ ಮಂದಹಾಸ


ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರು "ಮುಸ್ಸಂಜೆ" ಕನ್ನಡದ ಸಂಜೆ ಪತ್ರಿಕೆಗಾಗಿ ಬರೆದ "ತುರ್ತಾಗಿ ಚಿಕಿತ್ಸೆ ಸಿಗದೆ ಸತ್ತು ಹೋಯಿತು ಆನೆ" ಎನ್ನುವ ವಿಶೇಷ ಲೇಖನವನ್ನು ರಾಜ್ಯ ಕಾನೂನು ಸಚಿವರಾದ ಸುರೇಶ್ ಕುಮಾರ್ ಅವರು ಆಸಕ್ತಿಯಿಂದ ಓದಿದರು. ಚಾಮರಾಜನಗರ ಸಮೀಪದ "ಕ್ಯಾತೇಶ್ವರ ಗುಡಿ"ಯಲ್ಲಿರುವ ಜಂಗಲ್ ಲಾಡ್ಜಸ್ ನಲ್ಲಿ ಇತ್ತೀಚೆಗೆ ವಿಶ್ರಾಂತಿ ಪಡೆಯಲು ಆಗಮಿಸಿದ್ದ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು "ಮುಸ್ಸಂಜೆ" ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನದ ಬಗ್ಗೆ ಹಾಗೂ ಆನೆಗಳ ಕುರಿತು ಇದೇ ಲೇಖನದಲ್ಲಿ ವ್ಯಕ್ತವಾದ ಕಾಳಜಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಷ್ಟೇ ಅಲ್ಲ ಲೇಖನದಲ್ಲಿ ಮೂಡಿಬಂದ ಕೆಲವು ವ್ಯಂಗ್ಯೋಕ್ತಿಗಳನ್ನು ವಿಶೇಷವಾಗಿ ಎರಡೆರಡು ಬಾರಿ ಓದಿ ಮನದುಂಬಿ ನಕ್ಕರು. ವಿಶೇಷವಾಗಿ ಸರ್ಕಾರವು ಆನೆಗಳ ಸಂತತಿ ಉಳಿಸುವ ಕಡೆಗೆ ಗಮನ ನೀಡಬೇಕು ಎನ್ನುವ ಆಶಯಕ್ಕೆ ತಮ್ಮ ಬೆಂಬಲವೂ ಇದೆ ಎಂದು ಕೂಡ ಇದೇ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು ಹೇಳಿದರು.