ನಡೆಯುವೆ ನಾ...!


ಅಯ್ಯೋ ಪಾಪ;
ಜನರ ಪಾಲಿಗೆ ಕತ್ತಲೆ.
ಆರೋಗ್ಯ ಕಾಯಬೇಕಾದವನ
ಬೋಳು ತಲೆ ಬೆತ್ತಲೆ!
ಧ್ವನಿ ಎತ್ತಿ ನಾಡಿನುದ್ದಕ್ಕೂ
ನಾನೆಷ್ಟು ಸುತ್ತಲಿ?
ಹಾಗೆಂದು ನಾನೆಂದೂ
ನುಡಿಯಲಾರೆ, ದಣಿಯಲಾರೆ.
ಬಿಡುವುದಿಲ್ಲ ಹಟ;
ಎತ್ತಿ ಹಿಡಿಯುವೆ ಕೈ.
ಕತ್ತಲೆ ಬಿತ್ತಿದವರ
ನೆತ್ತಿಯ ಸುಡುವೆ.
ತಾಯಿಯ ಒಡಲಿನ
ಸಿರಿಯನೆಲ್ಲಾ ಅಗಿದು
ಬಗೆದವರ ಬಗ್ಗುಬಡಿಯುವೆ.
ಹಿಗ್ಗಿನಿಂದ ನಡೆಯುವೆ;
ಮತ್ತೆ ನೂರಾರು ಮೈಲಿ.
ಈ ಹೋರಾಟದಲ್ಲಿ ದಣಿವಿಲ್ಲ;
ಕರುನಾಡಿಗೆ ಹೊಸದೊಂದು
ಬೆಳಕು ಕಾಣುವವರೆಗೆ.

-ಬಿ.ಬಿ.ರಾಮಸ್ವಾಮಿ ಗೌಡ
ಶಾಸಕ, ಕುಣಿಗಲ್ ವಿಧಾನಸಭಾ ಕ್ಷೇತ್ರ