ಶ್ರೀಧರ್ ಆಚಾರ್ ನಿಧನಕ್ಕೆ ಸಂತಾಪ

ರಾಜಕೀಯ ವಿಶ್ಲೇಷಣೆಗೆ ವಿಶೇಷವಾದ ಭಾಷೆಯೊಂದನ್ನು ನೀಡಿದ್ದ ಶ್ರೀಧರ್ ಆಚಾರ್ ನಿಧನವು ರಾಜ್ಯದ ಪತ್ರಿಕೋದ್ಯಮಕ್ಕೆ ದೊಡ್ಡ ನಷ್ಟ. "ಪ್ರಜಾವಾಣಿ" ಕನ್ನಡ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ರಾಜಕೀಯ ವರದಿ ಹಾಗೂ ವಿಶ್ಲೇಷಣೆಗಳಿಂದ ಕರ್ನಾಟಕದ ರಾಜಕಾರಣಿಗಳಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾ ಬಂದಿದ್ದ ಹಾಗೂ ತಪ್ಪು ಮಾಡಿದ ರಾಜಕಾರಣಿಗಳ "ಕಿವಿ"ಯನ್ನು ಮೊನಚಾದ ಪದಗಳಿಂದಲೇ "ಹಿಂಡುತ್ತಿದ್ದ" ವಿವೇಚನೆಯುಳ್ಳ ಪತ್ರಕರ್ತರನ್ನು ಕಳೆದುಕೊಂಡ ಕನ್ನಡ ನಾಡು ಈಗ ಬಡವಾಗಿದೆ.

ರಾಜಕೀಯ ವಲಯದಲ್ಲಿ "ಸಂಭಾವಿತ ಪತ್ರಕರ್ತ" ಎಂದೇ ಗುರುತಿಸಿಕೊಂಡಿದ್ದ ಶ್ರೀಧರ್ ಆಚಾರ್ ಅವರ ಅಗಲಿಕೆಯು ವೈಯಕ್ತಿಕವಾಗಿ ನನಗೂ ಅಪಾರ ವೇದನೆಯುಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಧಿಸುತ್ತೇನೆ.

ಮೃತರ ಕುಟುಂಬದವರಿಗೆ ಪರಿವಾರದ ಹಿರಿಯನ ಅಗಲಿಕೆಯ ವೇದನೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ.

ಬಿ.ಬಿ.ರಾಮಸ್ವಾಮಿ ಗೌಡ,
ಶಾಸಕರು
ಕುಣಿಗಲ್ ವಿಧಾನಸಭಾ ಕ್ಷೇತ್ರ